ಸಿಂಹ ಹಾಕಿದ ಹೆಜ್ಜೆ ಸದ್ಯದಲ್ಲೆ ಸೆನ್ಸಾರ್ ಮುಂದೆ
Posted date: 13 Thu, Oct 2016 – 09:52:03 AM

ಪತಿ ಫಿಲಂಸ್ ಲಾಂಛನದಡಿಯಲ್ಲಿ ಶ್ರೀ ಪಾರ್ಥಸಾರಥಿ, ಗೌತಂ ಸೇಠ್ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ ಸಿಂಹ ಹಾಕಿದ ಹೆಜ್ಜೆ ಈಗ ತೆರೆಗೆ ಸಿದ್ದವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಮುಂದೆ ಹೋಗಲಿದೆ.
ಚಿತ್ರವು ನವೆಂಬರ್‌ನಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಪಕ್ಕಾ ವಿಷ್ಣುವರ್ಧನ್ ಅಭಿಮಾನಿಯಾದ ಈ ಚಿತ್ರದ ನಿರ್ಮಾಪಕ ಪಾರ್ಥಸಾರಥಿ ಚಿತ್ರವನ್ನು ವಿಷ್ಣುವರ್ಧನ್‌ಗೆ ಸಮರ್ಪಿಸುತ್ತಿದ್ದೇವೆ ಎಂದಿದ್ದಾರೆ.

ಚಿತ್ರಕ್ಕೆ ಪಾರ್ಥಸಾರಥಿ ಕಥೆ, ರವಿಶಂಕರ್‌ನಾಗ್ ಸಂಭಾಷಣೆ, ಶಿವಕುಮಾರ್ ಛಾಯಾಗ್ರಹಣ, ಹರಿಬಾಬು ಸಂಗೀತ, ವಿಶ್ವ ಸಂಕಲನ, ಮಂಜು ಮೋಹನ್ ಸಾಹಿತ್ಯ, ರಾಜು ನೃತ್ಯ, ಬಾಬುಖಾನ್ ಕಲೆ, ವೇಣುಗೋಪಾಲ್ ನಿರ್ಮಾಣ ಮೇಲ್ವಿಚಾರಣೆ ಇದ್ದು,  ಚಿತ್ರಕಥೆ, ಸಾಹಸ ಮತ್ತು ನಿರ್ದೇಶನ ವಿಕ್ರಂ.
ತಾರಾಗಣದಲ್ಲಿ ಪ್ರೀತಂ, ಅಮೃತ, ಶರತ್ ಲೋಹಿತಾಶ್ವ, ಶೋಭರಾಜ್, ಪವನ್, ತಬಲ ನಾಣಿ, ಸಂಗೀತ, ರಾಜು ತಾಳಿಕೋಟೆ, ಜಯಶ್ರೀರಾಜ್, ಸೋನು ಮುಂತಾದವರಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed